Home
ಸಾರ್ವಜನಿಕ ಕುಂದು ಕೊರತೆ ಸಹಾಯವಾಣಿ ಸಂಖ್ಯೆ:08359-231165
ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ 2012
ಗಣಕೀಕರಣ : ಕೊಪ್ಪಳ ನಗರಸಭೆಯು ಆಸ್ತಿ ತೆರಿಗೆ ಸಂಗ್ರಹಣೆಯನ್ನು ಗಣಕೀಕರಣ ಮಾಡಿದ್ದು . ಇದರ ಜೊತೆಗೆ 1990 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೆ ಜನನ-ಮರಣ ನೊಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ.ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೇಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.
COMPUTERIZATION: We are very happy to intimate the citizens of Koppal city that we have computerized the collection of Property Tax , Birth and Death certificates from 1990 to till date under state Government Nirmala Nagar computerization scheme, from now on wards citizens are requested to visit the citizen service centre at the office for registration and getting of Birth and Death certificates by paying service fee. Citizens are requested to make use of this facility.
ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ತಿಳಿಯಬಹುದು ಇಲ್ಲಿ ಕ್ಲಿಕ್ ಮಾಡಿ ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)): ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಕಾರ್ಯ ನಿರ್ವಹಿಸುತ್ತಿರುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ ಲೈನ್ ಆಪ್ಲೀಕೇಷನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ಸಹಾಯವಾಣಿ ಸಂಖ್ಯೆ:08539-231165. ಸಾರ್ವಜನಿಕರು ತಮ್ಮ ದೂರುಗಳನ್ನು ಆನ್ಲೈನ್ ಮೂಲಕ ದಾಖಲಿಸಬಹುದು ಇಲ್ಲಿ ಕ್ಲಿಕ್ ಮಾಡಿ
ನಗೆರ ಸಭೆಯ ಪ್ರಮುಖ ಧ್ಯೇಯೋದ್ದೇಶಗಳು ಈ ಕೆಳಕಂಡಂತಿರುತ್ತವೆ.
• ನಗರದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
• ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವುದು.
• ಮನೆ ಬಳಕೆ, ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ನೀರಿನ ಸಂಪರ್ಕ ಒದಗಿಸುವುದು. • ಸಾರ್ವಜನಿಕರ ಆರೋಗ್ಯ, ನೈರ್ಮಲ್ಯ ಕಾಪಾಡುವುದು. • ನಗರದಲ್ಲಿ ದುರ್ಬಲ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು. • ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ. • ನಗರದ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ ಮತ್ತು ನಗರದ ಬಡತನ ನಿವಾರಣೆ. • ಬೀದಿ ದೀಪ, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಂತ ಮೂಲ ಸೌಕರ್ಯಗಳನ್ನು ಒದಗಿಸುವುದು. • ಸ್ಮಶಾನ ಮತ್ತು ಸ್ಮಶಾನ ಭೂಮಿ, ಅಂತ್ಯ ಸಂಸ್ಕಾರ, ಸುಡುವಿಕೆಗೆ ಭೂಮಿ ಸೌಕರ್ಯಗಳನ್ನು ಒದಗಿಸುವುದು. • • ಜನನ ಮರಣ ನೊಂದಣಿ ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು. • ಕಸಾಯಿಖಾನೆಗಳ ನಿಯಂತ್ರಣ. • ಆಸ್ತಿ ತೆರಿಗೆ, ಜಾಹೀರಾತು ತೆರಿಗೆ ಮತ್ತಿತರ ಶುಲ್ಕಗಳ ಮೇಲ್ವಿಚಾರಣೆ. • ರಸ್ತೆ ಮತ್ತು ಬೀದಿ ದೀಪಗಳ ದುರಸ್ಥಿ ಮತ್ತು ನಿರ್ವಹಣೆ. • ಅಪಾಯಕಾರಿ ರೋಗಗಳ ನಿಯಂತ್ರಣ. ಇವುಗಳು ನಮ್ಮ ಸ್ಥಳೀಯ ಸಂಸ್ಥೆಗಳ ಮುಖ್ಯಧ್ಯೇಯೋದ್ದೇಶಗಳಾಗಿದ್ದು ಸ್ಥಳೀಯ ಸಂಸ್ಥೆಯು ಸಾರ್ವಜನಿಕ ಸೌಲಭ್ಯ ರಚನೆ ಮತ್ತು ನಿರ್ವಹಣೆಯಲ್ಲಿ ಸದಾ ತೊಡಗಿರುತ್ತದೆ.
ಕೊಪ್ಪಳ ನಗರದ ಸಮಸ್ತ ಆಸ್ತಿಯ ಮಾಲಿಕರುಗಳಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ, ಭೂ ಬಾಡಿಗೆ, ಲೈಸನ್ಸ್ ಫೀ, ಮಳಿಗೆ ಬಾಡಿಗೆ, ಹಳೆಯ ಘರಪಟ್ಟಿ, ಅಭಿವೃಧ್ಧಿ ಕರ ಇತ್ಯಾದಿ ಕರಗಳನ್ನು ನಗರ ಸಭೆಗೆ ಕೂಡಲೇ ಭರಣಾ ಮಾಡಿ ನಗರದ ಅಭಿವೃಧ್ಧಿ ಕಾರ್ಯಗಳಿಗೆ ಸಹಕರಿಸಲು ಈ ಮೂಲಕ ವಿನಂತಿಸಿದೆ.
ಕೊಪ್ಪಳ ನಗರದ ಇತಿಹಾಸ
ಕೊಪ್ಪಳ ನಗರವು ಈ ಮೊದಲು ರಾಯಚೂರು ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿತ್ತು. ಈಗ 1997-98 ರಲ್ಲಿ ಪ್ರತ್ಯೇಕ ಹೊಸ ಜಿಲ್ಲೆಯಾಗಿ ನಿರ್ಮಾಣಗೊಂಡಿತು. ಕೊಪ್ಪಳ ಜಿಲ್ಲೆಯು ಇತಿಹಾಸವು ಶಿಲಾಯುಗದಿಂದ ಪ್ರಾರಂಭವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕಲ್ಲು ಗೋರಿಗಳು ಕೊಪ್ಪಳ ಗುಡ್ಡದಲ್ಲಿ ಸಿಗುತ್ತವೆ. 10ನೇ ಶತಮಾನದ ಮೌರ್ಯರ ಕಾಲದಲ್ಲಿ ಅತ್ಯಂತ ಪವಿತ್ರ ಭೌದ್ದರ ಕ್ಷೇತ್ರವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಶೋಕನ ಅನೇಕ ಶಾಸನಗಳು ಈಗಲೂ ಸಿಗುತ್ತವೆ. ಗಂಗ ಅರಸರು ಕೂಡ ಈ ನಗರದ ಅಭಿವೃದ್ಧಿಗೆ ಮತ್ತು ಕೋಟೆ ನಿರ್ಮಾಣ ಇವರ ಕಾಲದಲ್ಲಿ ನಿರ್ಮಾಣಗೊಂಡಿವೆ ನಂತರ ಟಿಪ್ಪು ಸುಲ್ತಾನನು ಫ್ರಂಚ್ ಇಂಜಿನೀಯರ್ ಸಹಾಯದಿಂದ ಪುನರ್ ನಿರ್ಮಾಣ ಮಾಡಿದನು ನಂತರ ಬ್ರಿಟೀಷರ ಕಾಲಕ್ಕೆ ಈ ಕೋಟೆಯನ್ನು ವಶಪಡಿಸಿಕೊಂಡರು. ಹೈದರಾಬಾದ ನಿಜಾಮನ ಆಡಳಿತ ವ್ಯಾಪ್ತಿಗೆ ಒಪ್ಪಿದರು.
ಕೊಪ್ಪಳ ನಗರವು ರಾಜ ನೃಪತುಂಗ ಕಾಲಕ್ಕೆ ವಿಧಿತ ಮಹಾ ಕೊಪಣ ನಗರವೆಂದು ಪ್ರಸಿದ್ಧಿ ಪಡೆದಿತ್ತು, ಅತ್ತಿಮಬ್ಬೆಯ ಕಾಲದಲ್ಲಿ ನಗರದಲ್ಲಿ ಅನೇಕ ಜೈನ ಬಸದಿಗಳು ನಿರ್ಮಾಣಗೊಂಡವು. ಜೈನ್ ಕಾಶಿವೆಂದು ಪ್ರಸಿದ್ಧಿ ಪಡೆದಿತ್ತು 12ನೇ ನೇ ಶತಮಾನದಿಂದ ಈಚೆಗೆ ಪ್ರಸಿದ್ಧ ಲಿಂಗಾಯತ ಮಠ ಗವಿಮಠ ತನ್ನ ಅನೇಕ ವಿದ್ಯಾ ಸಂಸ್ಥೆಗಳ ಹಾಗೂ ಉಚಿತ ಪ್ರಸಾದ ನಿಲಯಗಳ ಮುಲಕ ಪ್ರಸಿದ್ಧಿಯನ್ನು ಪಡೆದಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಕೊಪ್ಪಳ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಇದಕ್ಕೆ ಸಂಬಂಧಿಸಿದಂತೆ ಸುಂದರ ವ್ಯವಸಾಯಕ್ಕೆ ಸಂಬಂಧಿಸಿದ ಮಾರುಕಟ್ಟೆ ನಿರ್ಮಾಣಗೊಂಡಿದ್ದು ಪ್ರಮುಖ ವ್ಯವಸಾಯ ಉತ್ಪನ್ನಗಳಾದ ಜೋಳ, ಸಜ್ಜೆ, ಶೇಂಗಾ, ಹತ್ತಿ ಮತ್ತು ಇನ್ನಿತರೆ ಎಣ್ಣೆ ಕಾಳುಗಳಗೆ ಉತ್ತಮ ಮಾರುಕಟ್ಟೆ ಒದಗಿಸಿದೆ. ಅದೇ ರೀತಿಯಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಬೃಹತ್ ಮಧ್ಯಮ ಕೈಗಾರಿಕೆಗಳು ಸ್ಥಾಪನೆಗೊಂಡು ಪ್ರಮುಖ ಕೈಗಾರಿಕಾ ಕೇಂದ್ರವಾಗಿ ರಾಜ್ಯದಲ್ಲಿ ಹೊರಹೊಮ್ಮುತ್ತಿದೆ. ಇದರಿಂದಾಗಿ ಜಿಲ್ಲೆಯ ಹಾಗೂ ರಾಜ್ಯದ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಅನುಕೂಲವಾಗಿದೆ.
This page is maintained by Commissioner,CMC,Koppal" the last Updated date 22-02-2013

